ಬಸವಣ್ಣ ವಚನಗಳು – Basavannanavara Vachanagalu in Kannada

Basavannanavara vachanagalu in kannada ಮಹಾನ್ ಜ್ಯೋತಿ ಬಸವಣ್ಣನವರು 11ನೇ ಶತಮಾನದಲ್ಲಿ ಹಲವಾರು ಸಮಾಜ ಸುಧಾರಣಾ ಕಾರ್ಯಗಳನ್ನು ಕೈಗೆತ್ತಿಕೊಂಡು ಸಮಾಜದಲ್ಲಿ ಇರುವ ಮೂಢನಂಬಿಕೆಗಳನ್ನ ಹೋಗಲಾಡಿಸುವ ದೃಷ್ಟಿಯಿಂದ ಹಲವು ಕೆಲಸಗಳನ್ನ ಪ್ರಾರಂಭಿಸಿದರು.

Basavannanavara Vachanagalu in Kannada ಈ ಕೆಳಗಿನಂತಿವೆ

ಕಳಬೇಡ ಕೊಲಬೇಡ

ಹುಸಿಯಾನುಡಿಯಲು ಬೇಡ

ಮುನಿಯಬೇಡ

ಅನ್ಯರಿಗೆ ಅಸಯ್ಯ ಪಡಬೇಡ

ತನ್ನ ಬಣ್ಣಿಸಬೇಡ

ಇದ್ದೀರಾ ಹಳಿಯಲು ಬೇಡ

ಇದೆ ಅಂತರಂಗ ಶುದ್ದಿ

ಇದೆ ಬಹಿರಂಗ ಶುದ್ದಿ

ಇದೆ ನಮ್ಮ

ಕೂಡಲಸಂಗಮದೇವನೊಲಿಸುವ ಪರಿ. 

ಲೋಕದ ಡೊಂಕ ನೀವೇಕೆ ತಿದ್ದುವಿರಿ

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ

ಕೂಡಲಸಂಗಮದೇವ.

ಉಳ್ಳವರು ಶಿವಾಲಯ ಮಾಡುವರು

ನಾನೇನು ಮಾಡಲಿ ಬಡವನಯ್ಯಾ ?

ಎನ್ನ ಕಾಲೇ ಕಂಭ, ದೇಹವೇ ದೇಗುಲ

ಶಿರವೇ ಹೊನ್ನ ಕಳಶವಯ್ಯ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿಗಿಲ್ಲ.

ದೇವನೊಬ್ಬ ನಾಮ ಹಲವು

ಪರಮ ಪತಿವ್ರತೆಗೆ ಗಂಡನೊಬ್ಬ

ಮತ್ತೊಂದಕ್ಕೆರಗಿಡದೆ ಕಿವಿ ಮೂಗು ಕೊಯ್ಯುವನು

ಹಲವು ದೈವದ ಎಂಜಲ ತಿಂಬವನೆಂಬೆ

ಕೂಡಲಸಂಗಮದೇವ.

ನುಡಿದರೆ ಮುತ್ತಿನ ಹಾರದಂತಿರಬೇಕು!

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!

ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು !

ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು ?

ನುಡಿಯೊಳಗಾಗಿ ನಡೆಯದಿದ್ದರೆ

ಕೂಡಲಸಂಗಮದೇವನೆಂತೊಲಿವನಯ್ಯ ?

ಜ್ಯಾನದ ಬಲದಿಂದ ಅಜ್ಯಾನದ ಕೇಡು

ಜ್ಯೋತಿಯ ಬಲದಿಂದ ತಮಂಧದ ಕೇಡು

ಸತ್ಯದ ಬಲದಿಂದ ಅಸತ್ಯದ ಕೇಡು

ಪುರುಷದ ಬಲದಿಂದ ಅವಲೋಹದ ಕೇಡು

ಕೂಡಲಸಂಗನ ಶರಣರನುಭಾವದಿಂದ

ಎನ್ನ ಭವದ ಕೇಡು ನೋಡಯ್ಯ.

ಹಾವು ತಿಂದವರು ನುಡಿಸಬಹುದು

ಗರ ಹೊಡೆದವರ ನುಡಿಸಬಹುದು

ಸಿರಿ ಗರ ಹೊಡೆದವರ ನುಡಿಸಲು

ಬಾರದು ನೋಡಯ್ಯ

ಬಡತನವೆಂಬ ಮಂತ್ರವಾದಿ ಹೋಗಲು

ಒಡನೆ ನುಡಿವರಯ್ಯ

ಕೂಡಲಸಂಗಮದೇವ .

ಅಭ್ಯಾಸವೆನ್ನ ವರ್ತಿಸಿತ್ತಯ್ಯ, ಭಕ್ತಿ

ಸಾಧ್ಯವಾಗದು , ನಾನೇವೆನಯ್ಯ

ಅನು ನಿಮ್ಮ ಮನ೦ಬೊಗುವನ್ನಕ್ಕ

ಕಾಯಗುಣಂಗಳ ಕಳೆದವರಿಗೆ

ಶರಣೆಂಬೆ ಕೂಡಲಸಂಗಮದೇವಾ .

ಕಂಗಳ ತುಂಬಿದ ಬಳಿಕ ನೋಡಲಿಲ್ಲ

ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ

ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ

ಮನ ತುಂಬಿದ ಬಳಿಕ ಪೂಜಿಸಲಿಲ್ಲ

ಮಹಾಂತ ಕೂಡಲಸಂಗಮದೇವ .

ವಿಷಯವೆಂಬ ಹಸುರನೆನ್ನ ಮುಂದೆ

ತಂದು

ಪಸರಿಸಿದೆಯಯ್ಯ

ಪಶುವೇನ ಬಲ್ಲದು

ಹಸುರೆಂದೆಳಸುವುದು

ವಿಷಯ ರಹಿತನ ಮಾಡಿ ಭಕ್ತಿರಸವ

ದನಿಯ ಮೇಯಿಸಿ

ಸುಬುದ್ಧಿಯೆಂಬುದಕವನ್ನೆರದು ನೋಡಿ

ಸಲಹಯ್ಯ

ಕೂಡಲಸಂಗಮದೇವ.

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ

ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ

ಮಾಡುವ ನೀಡುವ ನಿಜಗುಣವುಳ್ಳಡೆ

ಕೂಡಿಕೊಂಬ ನಮ್ಮ ಕೂಡಲಸಂಗಮದೇವ.

ನೀ ಹುಟ್ಟಿಸಿದಲ್ಲಿ ಹುಟ್ಟಿ , ನೀ ಕೊಂದಲ್ಲಿ

ಸಾಯದೆ

ನೀನಿರಿದಲ್ಲಿ ಇರದೇ ಎನ್ನವಶವೇ ಅಯ್ಯಾ.

ಅಕಟಕಟಾ ಎನ್ನವನೆನ್ನವನೆನ್ನಯ್ಯ

ಕೂಡಲಸಂಗಮದೇವಯ್ಯ

ಬಸವಣ್ಣ ವಚನಗಳು Small Basavanna Vachanagalu in Kannada

ಬಹಳ ಹಿಂದೆ ಹಲವು ಪಿಡುಗುಗಳಿದ್ದವು ಅವು ಸಮಾಜದ ಜನರಲ್ಲಿ ವಿಷ ಬೀಜವನ್ನು ಬಿತ್ತಿ ಸೌಹಾರ್ದತೆ ಕಾಪಾಡಿಕೊಳ್ಳಲು ಸಾಧ್ಯವಾಗದ ಸನ್ನಿವೇಶಗಳನ್ನು ಸೃಷ್ಟಿಸಿದ್ದವು. ಸಮಾಜದಲ್ಲಿನ ಎಲ್ಲರೂ ಒಂದೇ ಕೂಡಿ ಬಾಳಬೇಕು ಇಂತಹ ತತ್ವಗಳನ್ನ ಸಾರಿದ ಬಸವಣ್ಣನವರು ಮೊಟ್ಟ ಮೊದಲ ಬಾರಿಗೆ ಜನರು ಒಟ್ಟಿಗೆ ಕೂತು ಚರ್ಚಿಸುವ ಅನುಭವ ಮಂಟಪ ಆರಂಭಿಸಿದರು ಇದರ ಅನುಸಾರವಾಗಿಯೇ ನಾವು ಇವತ್ತಿನ ಪಾರ್ಲಿಮೆಂಟ್ ಮೀಟಿಂಗ್ ಕಾಣಬಹುದಾಗಿದೆ. ಸಮಾಜದ ಉದ್ದಕ್ಕೆ ಯಾವೆಲ್ಲ ಅಂಶಗಳು ಅತಿ ಅಗತ್ಯ ಅವನ್ನ ಎತ್ತಿ ಹಿಡಿದು ಜನರಲ್ಲಿ ಸದಾಭಿ ರುಚಿ ಬರಲು ಏನೆಲ್ಲಾ ಅಗತ್ಯ ಅಂಶಗಳಿವೆ ಅದನ್ನ ಜನರಿಗೆ ಸಾರಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ Small Basavanna Vachanagalu in Kannada ಅಂಶಗಳನ್ನ ಬಸವಣ್ಣನವರು ಸಾರಿ ಹೇಳಿದರು.

ದಯವಿಲ್ಲದ ಧರ್ಮವಾವುದಯ್ಯ

ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ

ದಯವೇ ಧರ್ಮದ ಮೂಲವಯ್ಯಾ

ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ!!

ಇವನಾರವ ಇವನಾರವ

ಇವನಾರವನೆಂದೆನಿಸದಿರಯ್ಯ

ಇವ ನಮ್ಮವ, ಇವ ನಮ್ಮವ,

ಇವ ನಮ್ಮವನೆಂದೆನಿಸಯ್ಯ

ಕೂಡಲಸಂಗಮದೇವಯ್ಯ

ನಿಮ್ಮ ಮನೆಯ ಮಗನೆಂದೆನಿಸಯ್ಯ.

ಹೊಲೆಯ ಹೊಲೆಯರ ಮನೆಯ ಹೊಕ್ಕು,

ಸೇಲೆ ಕೈಕೂಲಿಯ ಮಾಡಿಯಾದರೆಯೂ

ನಿಮ್ಮ ನಿಲವಿಂಗೆ ಕುದಿವೇನಲ್ಲದೆ,

ಎನ್ನೊಡಲವಸರಕ್ಕೆ ಕುಡಿದೆನಾದರೆ

ತಲೆದಂಡ! ಕೂಡಲಸಂಗಮದೇವಾ.

ಉದಯಾಸ್ತಮಾನವೆನ್ನ ಬೆಂದ ಬಸುರಿ೦ಗೆ ಕುದಿಯಲಲ್ಲದೆ ,

ನಿಮ್ಮ ನೆನೆಯಲು ತೆಳುಹಿಲ್ಲಯ್ಯಾ!

ಎಂತೋ ! ಲಿಂಗ ತಂದೆ, ಎಂತಯ್ಯಾ ? ಎನ್ನ ಪೂರ್ವಲಿಖಿತ !

ಬೆರಣಿಯನಾಯಲಲ್ಲದೆ ಅಟ್ಟುಣ್ಣ ತೆರಹಿಲ್ಲವೆನಗೆ !

ನೀರುಕಣಿಸಾ, ಕೂಡಲಸಂಗಮದೇವಾ!

ಪಾಪಿಯ ಧನ ಪ್ರಾಯಾಶ್ಚಿತ್ತಕ್ಕಲ್ಲದೆ

ಸತ್ಪಾತ್ರಕ್ಕೆ ಸಲ್ಲದಯ್ಯ

ನಾಯಿಯ ಹಾಲು ನಾಯಿ ಮರಿಗಲ್ಲದೆ

ಮಾಡುವ ಅರ್ಥ ವ್ಯರ್ಥ ಕಂಡಯ್ಯಾ

ಕೂಡಲಸಂಗಮದೇವಾ.

ಎನಗಿಂತ ಕಿರಿಯರಿಲ್ಲ

ಶಿವಭಕ್ತರಿಗಿಂತ ಹಿರಿಯರಿಲ್ಲ

ನಿಮ್ಮ ಪಾದಸಾಕ್ಷಿ ಎನ್ನ ಮನಃಸಾಕ್ಷಿ

ಕೂಡಲಸಂಗಮದೇವ ಏನಾಗಿದೆ ದಿವ್ಯ.

ಮಡಕೆಯ ಮಾಡುವಡೆ ಮಣ್ಣೇ ಮೊದಲು

ತೊಡಿಗೆಯ ಮಾಡುವಡೆ ಹೊನ್ನೆ ಮೊದಲು

ಶಿವಪಥವನರಿವಡೆ ಗುರುಪದವೇ ಮೊದಲು

ಕೂಡಲಸಂಗಮದೇವನರಿವಡೆ

ಶರಣರ ಸಂಗವೇ ಮೊದಲು .

ಮರ್ತ್ಯಲೋಕವೆಂಬುದು ಕರ್ತಾರನ

ಕಮ್ಮಟವಯ್ಯ

ಇಲ್ಲಿ ಸಲ್ಲುವರು ಅಲ್ಲಿಯೂ

ಸಲ್ಲುವರಯ್ಯಾ;

ಇಲ್ಲಿ ಸಲ್ಲದವರು ಅಲ್ಲಿಯೂ

ಸಲ್ಲರಯ್ಯ ,

ಕೂಡಲಸಂಗಮದೇವ .

ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ

ಲಿಂಗದ ಮೇಲೆ ನಿಷ್ಟೆಯಿಲ್ಲದ ಭಕ್ತ

ಇದ್ದಡೇನೋ , ಶಿವ ಶಿವಾ ಹೋದಡೇನೋ ?

ಕೂಡಲಸಂಗಮದೇವನ ಉಡಾವ ಆವಿಂಗೆ ಉಣ್ಣವ ಕಾರುವ ಬಿಟ್ಟಂತೆ.

ಬಸವಣ್ಣ ವಚನಗಳು Basavannanavara Kannada Vachanagalu ಹಲವು ಅವುಗಳಲ್ಲಿ ಅತಿ ಪ್ರಮುಖವಾದವು ಈ ಕೆಳಗಿನಂತಿವೆ

1032 ರಲ್ಲಿ ಬಸವಣ್ಣನವರು ಮಾದರಸ ಹಾಗೂ ಮಾದಲಾಂಬಿಕೆ ಎಂಬ ದಂಪತಿಗೆ ಮಗನಾಗಿ ಜನಿಸಿದರು ಚಿಕ್ಕವಯಸ್ಸಿನಿಂದಲೇ ಜ್ಞಾನಿಯಾಗಿದ್ದ ಬಸವಣ್ಣನವರು ಹಲವು ತತ್ವಗಳನ್ನ ಪ್ರತಿಪಾದಿಸಿದರು ವಚನಗಳನ್ನ ಬರೆಯುವುದರ ಮೂಲಕ ಜನರಲ್ಲಿ ಬದಲಾವಣೆಯನ್ನು ತರಲು ಪ್ರಾರಂಭಿಸಿದರು ಹಾಗಾಗಿ ಹಲವು ಸುಂದರ basavannanavara kannada vachanagalu ಳಲ್ಲಿ ಬಹು ಮುಖ್ಯವಾದವನ್ನ ಈ ಕೆಳಗೆ ನೀಡಿದ್ದೇವೆ.

ಹಿಂದಿನ ಕಾಲದಲ್ಲಿ ಮದುವೆ ಸಾವಿರ ವರ್ಷಗಳ ಹಿಂದೆ ಜನರ ಜೀವನ ತುಂಬಾ ವೈಶಿಷ್ಟವಾಗಿತ್ತು ದೇವರಲ್ಲಿ ಅತಿಯಾಗಿ ನಂಬಿಕೆ ಬಂದಿದ್ದ ಜನರು ಹಲವು ಮೂಢನಂಬಿಕೆಗಳನ್ನ ಜೀವನದಲ್ಲಿ ಅಳವಡಿಸಿಕೊಂಡು ತೊಂದರೆಗಳನ್ನ ಅನುಭವಿಸುತ್ತಿದ್ದರು ಹಿಂದೂ ಧರ್ಮದ ಹಲವು ಕೆಟ್ಟ ಸಂಪ್ರದಾಯಗಳನ್ನ ಆಗಿನ ಕಾಲದ ಜನರು ಅಳವಡಿಸಿಕೊಂಡು ಕೆಟ್ಟ ಸಂಪ್ರದಾಯಗಳಿಗೆ ಬಲಿಯಾಗುತ್ತಿದ್ದರು ಅವುಗಳಿಂದ ಅಷ್ಟೊಂದು ತೊಂದರೆ ಆಗುತ್ತಿದ್ದರೂ ಸಹ ಜನರು ಬಿಡದೆ ಪಾಲಿಸುತ್ತಿದ್ದರು ಆ ಕಾರಣಕ್ಕಾಗಿ ತುಂಬಾ ಮನನೊಂದ ಬಸವಣ್ಣನವರು ಜನರಿಗೆ ಈ ರೀತಿ ಮಾಡುವುದು ತಪ್ಪು ಎಂದು ಹೇಳಿ ಜನರ ಮನಪರಿವೃತ್ತಿ ಮಾಡಲು ಬಯಸಿದರೆ ಅಲ್ಲದೆ ಹಲವು ವಚನಗಳನ್ನ ಜನರಿಗೆ ಸುಲಭವಾಗಿ ಅರ್ಥವಾಗಲೆಂದು ರಚಿಸಿದರು.

ತಂದೆ ನೀನು ತಾಯಿ ನೀನು

ಬಂದು ನೀನು ಬಳಗ ನೀನು

ಎನಗೆ ನೀನಿಲ್ಲದೆ

ಮತ್ತಾರು ಇಲ್ಲವಯ್ಯಾ

ಕೂಡಲಸಂಗಮದೇವ.

ಅಂಜಿದರಾಗದು ಅಳುಕಿದರಾಗದು !

ವಜ್ರಪಂಜರದೊಳಗಿದ್ದರಾಗದು !

ತಪ್ಪದೆಲವೋ ಲಲಾಟಲಿಖಿತ!

ಕಕ್ಕುಲತೆಬಟ್ಟರಾಗದು ನೋಡಾ!

ದೃತಿಗೆಟ್ಟು ಮನ ಧಾತುಗೆಟ್ಟರೆ

ಅಪ್ಪುದು ತಪ್ಪುದು ಕೂಡಲಸಂಗಮದೇವ.

ಓಡಲಾರದ ಮೃಗವು

ಸೊಣಗಂಗೆ ಮಾಂಸವ ಕೊಡುವಂತೆ ,

ಮಾಡಲಾಗದು ಭಕ್ತನು, ಕೊಳಲಾಗದು ಜಂಗಮ ;

ಹಿರಿಯರು ನರಮಾಂಸವ ಭುಂಜಿಸುವರೇ?

ತಾನು ಉಕ್ಕಿ ಮನ ಉಕ್ಕಿ ಮಾಡಬೇಕು ಭಕ್ತಿಯ ,

ಮಾಡಿಸಿಕೊಳ್ಳಬೇಕು ಜಂಗಮ ,

ಕೂಡಲಸಂಗಮದೇವ.

ಭಕ್ತಿ ಇಲ್ಲದ ಬಡವ ನಾನಯ್ಯ

ಕಕ್ಕಯ್ಯನ ಮನೆಯಲ್ಲೂ ಬೇಡಿದೆ

ಚೆನ್ನಯ್ಯನ ಮನೆಯಲ್ಲೂ ಬೇಡಿದೆ

ದಾಸಯ್ಯನ ಮನೆಯಲ್ಲೂ ಬೇಡಿದೆ

ಎಲ್ಲ ಪುರಾತನರು ನೆರೆದು ಭಕ್ತಿ

ಭಿಕ್ಷವನ್ನಿಕ್ಕಿದಡೆ ಎನ್ನ ಪತ್ರೆ ತುಂಬಿತ್ತು

ಕೂಡಲಸಂಗಮದೇವ.

ಇಬ್ಬರು ಮೂವರು ದೇವರೆಂದು

ಉಬ್ಬಿ ಮಾತನಾಡಬೇಡ

ಒಬ್ಬನೇ ಕಾಣಿರೋ ಇಬ್ಬರೆಂಬುದು

ಹುಸಿನೋಡಾ

ಕೂಡಲಸಂಗಮದೇವನಲ್ಲದೆ

ಇಲ್ಲವೆಂದಿತು ವೇದ…

ನೀನೊಲಿದರೆ ಕೊರಡು ಕೊನರುವುದಯ್ಯ

ನೀನೊಲಿದರೆ ಬರಡು ಹಯನಹುದಯ್ಯ

ನೀನೊಲಿದರೆ ವಿಷವಮೃತವಹುದಯ್ಯ

ನೀನೊಲಿದರೆ ಸಕಲ ಪಡಿಪಧಾರ್ಥ ಇದಿರಲಿಪ್ಪವು

ಕೂಡಲಸಂಗಮದೇವ.

ಅಂಕ ಕಂಡ ಕೊಲಾಸೇ ಮತ್ತೆಕಯ್ಯಾ

ಲೆಂಕ ಕಂಡ , ಪ್ರಾಣದಾಸೆ ಮತ್ತೆಕಯ್ಯಾ

ಭಕ್ತ ಕಂದಾ, ತನುಮನಧನದಾಸೆ ಮತ್ತೆಕಯ್ಯಾ

ನಿಮ್ಮ ಅಂಕೆಗೆ ಝ೦ಕೆಗೆ ಶಂಕಿತನಾದಡೆ

ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ.

Small Basavanna vachanagalu in kannada

ಬಸವಣ್ಣನವರು ಕೇವಲ ವಚನಗಳನ್ನಷ್ಟೇ ರಚಿಸದೆ ಹಲವು small basavanna vachanagalu in kannada and ಸಾಹಿತ್ಯವನ್ನು ಸಹ ರಚಿಸಿದ್ದಾರೆ ಅವುಗಳಲ್ಲಿ ಬಹು ಮುಖ್ಯವಾದ ವಚನ ಸಾಹಿತ್ಯಗಳು ಎಂಬ ಕಾವ್ಯ ತುಂಬಾ ಹೆಸರುವಾಸಿಯಾಗಿದೆ ಬಿಜ್ಜಳನ ಸಾಮ್ರಾಜ್ಯದಲ್ಲಿ ಮಂತ್ರಿಯಾಗಿ ಕವಿಯಾಗಿಯೂ ಸಹ ಕಾರ್ಯನಿರ್ವಹಿಸಿದ್ದಾರೆ ಬಸವಣ್ಣನವರು ಸಮಾಜದಲ್ಲಿನ ಅಂಕುಡೊಂಕು ಹಾಗೂ ಮೂಢನಂಬಿಕೆಗಳನ್ನ ದೂರ ಮಾಡುವ ಉದ್ದೇಶದಿಂದ ಹಲವು ಸಾಮಾನ್ಯ ವಚನಗಳನ್ನ ರಚಿಸಿ ಜನರಿಗೆ ಹೇಗೆ ತಿಳುವಳಿಕೆ ಮೂಡಿಸಬೇಕು ಎಂಬುದನ್ನು ಅಧ್ಯಯಸಿ ವಚನಗಳನ್ನ ರಚಿಸಿದರು ಇಂದಿಗೂ ಸಹ ಆ ವಚನಗಳು ಬಹಳ ಹೆಸರುವಾಸಿಯಾಗಿವೆ ಜೊತೆಗೆ ಅನುಭವ ಮಂಟಪ ಬಸವಣ್ಣನವರೇ ಮೊದಲ ಬಾರಿಗೆ ರಚಿಸಿದ್ದರು.

ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ , ಕಾಣಿ ಭೋ !

ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ !

ಆಚಾರವೇ ಸ್ವರ್ಗ , ಅನಾಚಾರವೇ ನರಕ-

ಕೂಡಲಸಂಗಮದೇವಾ, ನೀವೇ ಪ್ರಮಾಣು !

ಕೊಲುವನೇ ಮಾದಿಗ , ಹೊಲಸ ತಿಂಬವನೇ ಹೊಳೆಯ!

ಕುಲವೇನೋ, ಆವಂದಿರ ಕುಲವೇನೋ ?

ಸಕಲ ಜೀವಾತ್ಮರಿಗೆ ಲೇಸನೇ ಬಯಸುವ

ನಮ್ಮ ಕೂಡಲಸಂಗನ ಶರಣರೇ ಕುಲಜರು.

ತುಪ್ಪದ ಸವಿಗೆ ಅಲಗ ನೆಕ್ಕುವ ಸೋಣಗದಂತೆನ್ನ

ಸಂಸಾರ ಸಂಗವ ಬಿಡದು ನೋಡೆನ್ನ ಮನವು.

ಈ ನಾಯಿತನವ ಮಾಣಿಸು,

ಕೂಡಲಸಂಗಮದೇವಾ, ನಿಮ್ಮ ಧರ್ಮ !

ತನ್ನಿಚ್ಛೆಯ ನುಡಿದರೆ ನಚ್ಚುವುದೀ ಮನವು,

ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವು

ಕೂದಲ ಸಂಗನ ಶರಣರ

ನಚ್ಚದ ಮನವ ಕಿಚ್ಚಿನೊಳಗಿಕ್ಕುವೆ !

ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯ;

ಹಸುವೇನ ಬಲ್ಲದು ? ಹಸುರೆಂದೆಳಸುವುದು.

ವಿಷಯರಹಿತನ ಮಾಡಿ ಭಕ್ತಿ ರಸವ ದನಿಯೇ ಮೇಯಿಸಿ ,

ಸುಬುದ್ಧಿಯೆಂಬುದಕವನೆರೆದು

ನೋಡಿ ಸಲಹಯ್ಯಾಳ, ಕೂಡಲಸಂಗಮದೇವಾ .

ನಾದಪ್ರಿಯ ಶಿವನೆಂಬರು -ನಾದ ಪ್ರಿಯ ಶಿವನಲ್ಲಯ್ಯಾ ;

ವೇದಪ್ರಿಯ ಶಿವನೆಂಬರು – ವೇದಪ್ರಿಯ ಶಿವನಲ್ಲಯ್ಯಾ ;

ನಾದವ ಮಡಿದ ರಾವಳಂಗೆ ಅರೆಆಯುಷ್ಯವಾಯಿತ್ತು !

ವೇದವನೋದಿದ ಬ್ರಾಹ್ಮಣ ಶಿರಾ ಹೋಯಿತ್ತು !

ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲಾ;

ಭಕ್ತಿ ಪ್ರಿಯ ನಮ್ಮ ಕೂದಲ ಸಂಗಮದೇವ .

ನೆಚ್ಚಿದೆನೆಂದರೆ,ಮೆಚ್ಚಿದೆನೆಂದರೆ ,ಸೇಲ ಮಾರುವೋದೆನೆಂದರೆ ,

ತನುವನಲ್ಲಾಡಿಸಿ ನೋಡುವೆ ನೀನು ,

ಮನವಲ್ಲಾಡಿಸಿ ನೋಡುವೆ ನೀನು ,

ಧನವನಾಲ್ಲಾಡಿಸಿ ನೋಡುವೆ ನೀನು,

ಇದಕ್ಕೆಲ್ಲ ಅಂಜದಿದ್ದರೆ ಭಕ್ತಿ ಕಂಪಿತ ನಮ್ಮ ಕೂದಲ ಸಂಗಮದೇವ !

ಪುಣ್ಯ ಪಾಪವೆಂಬುದು ತಮ್ಮಿಷ್ಟ ಕಂಡಿರೆ

‘ಅಯ್ಯಾ’ ಎಂದೆಡೆ ಸ್ವರ್ಗ, ‘ಎಲೆವೊ’ ಎಂದಡೆ ನರಕ!

‘ದೇವಾ,ಭಕ್ತ ಜಯಾ, ಜಿಯಾ’ ಎಂಬ ನುಡಿಯೊಳಗೆ

ಕೈಲಾಸವಿದ್ದುದ್ದೇ ಕೂಡಲಸಂಗಮದೇವಾ.

ಸಂಸಾರವೆಂಬುದೊಂದು ಗಾಳಿಯ ಸೊಡರು,

ಸಿರಿಯೊಂಬುದೊಂದು ಸಂತೆಯ ಮಂದಿ,ಕಂಡಯ್ಯಾ !

ನೆಚ್ಚಿ ಕೆಡಬೇಡ -ಸಿರಿಯೆಂಬುದ !

ಮರೆಯದೆ ಪೂಜಿಸು ನಮ್ಮ ಕೂಡಲಸಂಗಮದೇವನ.

ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿಂತೆಂಬರು ;

ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು

ಎಂತಯ್ಯಾ , ಅವರ ಬಕ್ತರೆಂಬೆ ?

ಕೂಡಲಸಂಗಮದೇವಾ, ಕೇಳಯ್ಯಾ ,

ಹೊಲತಿ ಶುದ್ಧ ನೀರ ಮಿಂದಂತಾಯಿತಯ್ಯಾ !

ನಾಳೆ ಬಪ್ಪುದು ನಮಗಿಂದೇ ಬರಲಿ;

ಇಂದು ಬಪ್ಪುದು ನಮಗೀಗಲೇ ಬರಲಿ ;

ಇದಕಾರಂಜುವರು , ಇದಕಾರಳುಕುವರು ?

“ಜಾಸತ್ಯ ಮರಣಂ ಧ್ರುವಂ” ಎಂಬುದಾಗಿ ,

ನಮ್ಮ ಕೂಡಲ ಸಂಗಮದೇವರು ಬರೆದ ಬರೆಹವ ತಪ್ಪಿಸುವರೇ.

ಹರಿಬ್ರಹ್ಮಾದಿಗಳಿಗಾಲವಲ್ಲಾ !

ಅಂದಣವನೇರಿದ ಸೊಣಗನಂತೆ

ಕಂಡೊಡೆ ಬಿಡದು ಮುನ್ನಿನ ಸ್ವಭಾವವನ್ನು –

ಸುಡು ! ಸುಡು !! ಮನವಿದು ವಿಷಯಕ್ಕೆ ಹರಿವುದು ;

ಮೃಡ, ನಿಮ್ಮನನುದಿನ ನೆನೆಯಲೀಯದು .

ಎನ್ನೊಡೆಯ ಕೂದಲ ಸಂಗಮ ದೇವಾ,

ನಿಮ್ಮ ಚರಣವ ನೆನೆವಂತೆ ಕರುಣಿಸು,

ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ!

ಆಶೆಯಾಮಿಷವ ತಾಮಿಸ , ಹುಸಿ, ವಿಷಯ ,

ಕುಟಿಲ,ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ –

ಇವನೆನ್ನ ನಾಲಿಗೆಯ ಮೇಲಿಂದೆತ್ತ ತೆಗೆದು ಕಳೆಯಯ್ಯಾ.

ಅದೇಕೆಂದೊಡೆ ನಿಮ್ಮತ್ತಲೆನ್ನ ಬರಲಿಯವು.

ಇದು ಕಾರಣ , ಇವೆಲ್ಲವ ಕಳೆದು

ಎನ್ನ ಪಂಚಾಯ್ವವರ ಭಕ್ತರ ಮಾಡು ,

ಕೂಡಲಸಂಗಮದೇವಾ .

ಕೆಸರಲ್ಲಿ ಬಿದ್ದ ಪಶುವಿನಂತಾನು

ದೆಸೆದೆಸೆಗೆ ಭಯ ಬಿಡುತ್ತಿದ್ದೆನಯ್ಯಾ

ಅಯ್ಯಾ! ಆರಯ್ವವರಿಲ್ಲ -ಅಕಟಕಟಾ !-

ಪಶುವೆಂದೆನ್ನ ಕೂಡಲಸಂಗಮದೇವ

ಕೊಂಬ ಹಿಡಿದೆತ್ತುವನ್ನಕ್ಕ .

‘ಅಯ್ಯಾ, ಅಯ್ಯಾ’ ಎಂದು ಕರೆಯುತಲಿದ್ದೆನೆ

‘ಅಯ್ಯಾ,ಅಯ್ಯಾ’ ಎಂದೋರಲುತ್ತಲಿದ್ದೇನೆ;

‘ಓ’ ಎನ್ನಲಾಗದೆ ಅಯ್ಯಾ ?

ಆಗಲು ನಿಮ್ಮುವ ಕರೆಯುತ್ತಲಿದ್ದೇನೆ ;

ಮೌನವೇ, ಕೂಡಲಸಂಗಮದೇವಾ?

ಏನು ಬಂದಿರಿ, ಹದುಳವಿದ್ದರೆ ? ಎಂದರೆ

ನಿಮ್ಮ ಮೈಸಿರಿ ಹಾಸಿ ಹೋಹುದೇ ?

ಕುಳ್ಳಿರೆಂದರೆ ನೆಲಕುಳಿಹೋಹುದೇ?

ಒಡನೆ ನುಡಿದರೆ ಶಿರಾ- ಹೊಟ್ಟೆಯೊಡೆಯುವುದೇ?

ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದಡೆ ,

ಕೊಯ್ಯದೆ ಮಾನಬನೇ ಕೂಡಲಸಂಗಮದೇವನು

Basavannanavara kannada vachanagalu

ಜನರು ತಮ್ಮ ತೊಂದರೆಗಳನ್ನ ಒಟ್ಟಿಗೆ ಕುಳಿತು ಒಬ್ಬರಿಗೊಬ್ಬರು ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂಬ ಹೊಸ ಮಾದರಿಯ ಸಂಸತ್ತನ್ನ ಆಗಿನ ಕಾಲದಲ್ಲೇ ಪ್ರಾರಂಭಿಸಿದ್ದರು ಎಂಬುದೇ ವಿಶೇಷ.

ಆಕಳ ಕಳ್ಳರು ಕೊಂಡೊಯ್ದರೆನ್ನದಿರಿಂ ಭೋ ನಿಮ್ಮ ಧರ್ಮ !

ಬೊಬ್ಬಿಡಿದಿರಿಂ ಭೋ, ನಿಮ್ಮ ಧರ್ಮ!

ಆರಡದಿರಿಂ ಭೋ, ನಿಮ್ಮ ಧರ್ಮ!

ಅಲ್ಲಿ ಉಂಬರೆ ಸಂಗಾ, ಇಲ್ಲಿ ಉಂಬರೆ ಸಂಗಾ!

ಕೂಡಲಸಂಗಮದೇವ, ಏಕೋ ಭಾವ!

ವ್ಯಾಧನೊಂದು ಮೊಲವ ತಂದರೆ ಸಾಳುವ ಹಾಗಕ್ಕೆ ಬಿಲವರಯ್ಯಾ.

ನೆಲನಾಳ್ದನ ಹೆಣ್ಣೆಂದರೆ ಒಂದಡಕೆಗೆ ಕೊಂಬವರಿಲ್ಲ, ನೋಡಯ್ಯಾ!

ಮೊಲನಿಂದ ಕರಕಷ್ಟ ನರನ ಬಾಳುವೆ!

ಸಾಲಿನಂಬೋ ನಮ್ಮ ಕೂಡಲಸಂಗಮದೇವ .

ಹೆಂಡತಿ ಮಾರಿ – ಮಸಣಿಯ ಭಕ್ತೆ !

ಗಂಡ ಕೊಂಬುದು ಪಾದೋದುಕ- ಪ್ರಸಾದ;

ಹೆಂಡತಿ ಕೊಂಬುದು ಸುರೆ – ಮಾಂಸ !

ಭಾಂಡ -ಭಾಜನ ಶುದ್ಧವಿಲ್ಲದವರ ಭಕ್ತಿ

ಹೆಂಡದ ಮಡಕೆಯ ಹೊರಗೆ ತೊಳೆದಂತೆ,

ಕೂಡಲಸಂಗಮದೇವಾ !

ಉದಕದೊಳಗೆ ಬೈಚಿಟ್ಟ

ಬೈಕೆಯ ಕಿಚ್ಚಿನಂತೆ ಇದ್ದಿತ್ತು;

ಸಸಿಯೊಳಗಣ

ರಸದ ರುಚಿಯಂತೆ ಇದ್ದಿತ್ತು ;

ನೆನೆಯೋಳಗಣ

ಪರಿಮಳದಂತೆ ಇದ್ದಿತ್ತು ;

ಕೂಡಲಸಂಗಮದೇವರ ನಿಲುವು

ಕನ್ನೆಯ ಸ್ನೇಹದಂತೆ ಇದ್ದಿತ್ತು .

ಜ್ಞಾನಾಮೃತವೆಂಬ ಜಲಧಿಯ ಮೇಲೆ

ಸಂಸಾರವೆಂಬ ಹಾವಸೆ ಮುಸುಕಿಹುದು .

ನೀರ ಮೊಗೆವವರು ಬಂದು ನೂಕಿದಲ್ಲದೆ ತೆರಳದು .

ಮರಳಿ ಮರಳಿ ಮುಸುಕುವುದು ಮಾಣದಯ್ಯಾ,

ಆಗಳೂ ಎನ್ನುವನು ನೆನೆವುತ್ತಿರಬೇಕೆಂದು-

ಬೇಗ ಗುರು ಅಪ್ಸಯಿಸಿ ತನ್ನ ಪ್ರಸಾದವೆಂದು ಕುರುಹ

ಕೊಟ್ಟನು

ದಿವಾರಾತ್ರಿ ಮಾಡ ಹೇಳಿದ ಲಿಂಗ ಪೂಜೆಯ

ತನ್ನನರಿಯಬೇಕೆಂದು

ಕೆರೆಯ ನೀರನುಂಡು ತೊರೆಯ ನೀರ ಹೊಗಳುವ

ಅರೆಮರಳುಗಳ ಮೆಚ್ಚ ನಮ್ಮ ಕೂಡಲಸಂಗಮದೇವ.

ಎಡದಕೈಯಲ್ಲಿ ಕತ್ತಿ , ಬಲದ ಕೈಯಲ್ಲಿ ಮಾಂಸ,

ಬಾಯಲ್ಲಿ ಸುರೆಯ ಗಡಿಗೆ –

ಕೊರಳಲಿ ದೇವರಿರಲಿ, ಅವರ ಲಿಂಗನೆಂಬೆ,ಸಂಗನೆಂಬೆ

ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು !

ಜಲವ ತಪ್ಪಿದ ಮತ್ಯ್ಸ, ಬದುಕುವುದೇ ಸೋಜಿಗ ,

ಗಣತಿಂಥಿಣಿಯೊಳಗಿರಿಸೆನ್ನನು,ಲಿಂಗವೇ,

ಶಿವ ಶಿವಾ, ಕೂಡಲಸಂಗಮದೇವ ,

ಸೆರಗೊಡ್ಡಿ ಬೇಡುವೆನು .

ಮನೆಯೊಳಗೇ ಮನೆಯೊಡೆಯನಿದ್ದಾನೊ ಇಲ್ಲವೋ?

ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೇ ರಜ ತುಂಬಿ ,

ಮನೆಯೊಳಗೇ ಮನೆಯೊಡೆಯನಿದ್ದಾನೊ ಇಲ್ಲವೋ?

ತನುವಿನೊಳಗೆ ಹುಸಿ ತುಂಬಿ , ಮನದೊಳಗೆ ವಿಷಯ ತುಂಬಿ,

ಮನೆಯೊಳಗೇ ಮನೆಯೊಡೆಯನಿಲ್ಲ –

ಕೂಡಲಸಂಗಮದೇವ .

ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕಂಜಲೇ ಬೇಕು

ದಕ್ಕ ನುಂಗಿದಂತೆ ಬೆರೆತುಕೊಂಡಿರಬೇಡ ;

ಬಿಗಿ ಬೆಳೆದ ಗೊನೆವಾಳೆಯಂತೆ ಬಾಗಿಕೊಂಡಿದ್ದಡೆ

ಬೇಡಿದ ಪದವಿಯನೀವ ಕೂಡಲಸಂಗಮದೇವ .

ಕರಿಘನ ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯಾ.

ಗಿರಿಗಾಣ ವಜ್ರ’ ಕಿರಿದೆನ್ನಬಹುದೆ ? ಬಾರದಯ್ಯಾ .

ತಮ್ಮಂತ ಘನ ಜ್ಯೋತಿ ಕಿರಿದೆನ್ನಬಹುದೆ ? ಬಾರದಯ್ಯಾ

ಮರಹು’ ಘಾನಾ ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ?

ಬಾರದಯ್ಯಾ

ಕೂಡಲಸಂಗಮದೇವ .

Small basavanna vachanagalu in kannada

ಶಿವಲೋಕಕ್ಕೆ ಸರಿ ಬೇರೆ ಲೋಕವಿಲ್ಲ

ಶಿವ ಮಂತ್ರಕ್ಕೆ ಸರಿ ಬೇರೆ ಮಂತ್ರವಿಲ್ಲ

ಜಾಗಕ್ಕೆ ಇಕ್ಕಿದೆ ಮುಂಡಿಗೆಯ

ಎತ್ತಿಕೊಳ್ಳಿ ಕೂಡಲಸಂಗಯ್ಯನೊಬ್ಬನೇ ದೈವವೆಂದು .

ಭಕ್ತಿಯೆಂಬ ಪೃಥ್ವಿಯ ಮೇಲೆ

ಗುರುಯೆಂಬ ಬೀಜವಂಕುರಿಸಿ

ಲಿಂಗವೆಂಬ ಎಲೆಯಾಯಿತು .

ಲಿಂಗವೆಂಬ ಎಲೆಯ ಮೇಲೆ

ವಿಚಾರವೆಂಬ ಹೂವಾಯಿತು

ಆಚಾರವೆಂಬ ಕಾಯಾಯಿತು

ನಿಪ್ಪತ್ತಿ ಎಂಬ ಹಣ್ಣಾಯಿತು

ನಿಪ್ಪತ್ತಿ ಎಂಬ ಹಣ್ಣು ತೊಟ್ಟುಬಿಟ್ಟು ಕಳಚಿ

ಬೀಳುವಲ್ಲಿ ಕೂಡಲಸಂಗಮದೇವಾ ತನಗೆ

ಬೇಕೆಂದು ಎತ್ತಿಕೊಂಡ .

ವೇದ ನಡನಡುಗಿತ್ತು .

ಶಾಸ್ತ್ರವಗಲಿ ಕೆಲಕ್ಕೆ ಸಾರಿದುದ್ದಯ್ಯ

ತರ್ಕ ತರ್ಕಿಸಲರಿಯದೆ ಮುಗುವಟ್ಟಿದ್ದಿತಯ್ಯಾ

ಆಗಮ ಹೊರತೊಲಗಿ ಅಗಲಿದ್ದಿತಯ್ಯ

ನಮ್ಮ ಕೂಡಲಸಂಗಯ್ಯನು

ಚೆನ್ನಯನ ಮನೆಯಲುಂಡ ಕಾರಣ.

Leave a Reply

Your email address will not be published. Required fields are marked *